`ಕೇಸ್ ನ೦ ೧೮/೯` ಚಿತ್ರೀಕರಣ ಮುಕ್ತಾಯ
Posted date: 31 Mon, Dec 2012 ? 03:52:16 PM

ಕ್ರಾಂತಿ ಕ್ರಿಯೇಷನ್ ಸಂಸ್ಥೆ ‘ಕೇಸ್ ನ೦ ೧೮/೯’ ಮಾತಿನ ಭಾಗದ ಚಿತ್ರೀಕರಣವನ್ನು ಬೆಂಗಳೂರು ಹಾಗೂ ಮಾಗಡಿಯ ಸುತ್ತ ಮುತ್ತ ಚಿತ್ರೀಕರಣ ಮಾಡಿ ಹಾಡುಗಳ ಚಿತ್ರಿಕರಣಕ್ಕಾ ಸಿದ್ದತೆ ಮಾಡಿಕೊಳ್ಳುತ್ತಿದೆ.

ನಿರ್ಮಾಪಕರುಗಳಾದ ವಿ,ಕೆ. ಮೋಹನ್, ಪ್ರವೀಣ್ ಕುಮಾರ್ ಶೆಟ್ಟಿ, ಶಿವಾನಂದ್ ಶೆಟ್ಟಿ, ಕಾಂತಿ ಶೆಟ್ಟಿ ಅವರ ಮೊದಲ ಜಂಟಿ ಪ್ರಯತ್ನದ ಈ ಚಿತ್ರವೂ ಡಾಕ್ಟರ್ ರಾಜಕುಮಾರ್ ಅವರ ಸಮಾಧಿ ಪೂಜೆಯ ನಂತರ ಪ್ರಾರಂಭವಾದ ಚಿತ್ರ. ಅಣ್ಣಾವ್ರ ಸಮಾದಿ ಬಳಿ ಇತ್ತೀಚಿಗೆ ಜನ ಹಿತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಚಿತ್ರದ ಕತವಸ್ತುವು ದೇಶದ ಎಲ್ಲ ಕಡೆ ಪಸರಿಸ ಬಹುದಾದ ವಿಚಾರ ಆದ್ದರಿಂದ ಈ ಚಿತ್ರವನ್ನೂ ಸಾಮಾಜಿಕ ಕಳಕಳಿಯಿಂದಲೂ ಮಾಡಲಾಗಿದೆ.

ನಾಯಕ ನಿರಂಜನ್ ಈ ಚಿತ್ರಕ್ಕಗೆ ಒಂದು ವಾರ ಕಾಲ ಕೊಳಚೆ ಪ್ರದೇಶದಲ್ಲಿ ಇದ್ದು ಅಲ್ಲಿನ ವಾತಾವರಣವನ್ನು ಗಮನಿಸಿ ಈ ಸಿನೆಮಕ್ಕೆ ಅಳವಡಿಸಿಕೊಂಡಿದ್ದಾರೆ. ಶ್ವೇತ ಪಂಡಿತ್, ಅಭಿ, ಸಿಂಧು ಲೋಕ ನಾಥ್ ಹಾಗೂ ಕಾರ್ತಿಕ್ ಶರ್ಮ ಈ ಚಿತ್ರದಲ್ಲಿ ಹಾಸ್ಯ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಮಹೇಶ್ ರಾವು ಚಿತ್ರೀಕರಣ ಸಂಪೂರ್ಣಗೊಳಿಸಿದ ಸಂತೋಷದಲ್ಲಿ ಇದ್ದಾರೆ. ಛಾಯಾಗ್ರಾಹಕ ಸಭಾ ಕುಮಾರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ರಾಜು ಬೆಳೆಗೆರೆ ಅವರ ಸಂಭಾಷಣೆ ಈ ಚಿತ್ರಕ್ಕಿದೆ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed